ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ...



ಸಣ್ಣ ಪುಟ್ಟ ವಿಚಾರಗಳು ದೊಡ್ಡದಾಗಿ ಕಾಡಿದಾಗಲೇ ....ಹೃದಯ ಸಮುದ್ರ ಕಲಕಿ... ಅನ್ಸೋದು ಅಲ್ವೇ....
ಪುಟ್ಟದಾಗಿ ಪ್ರತ್ಯಕ್ಷವಾಗುವ ಸಣ್ಣ ಅಂಶವೊಂದು ಬೃಹತ್ತಾಗಿ ಕಾಡುವುದು ಮಾತ್ರವಲ್ಲ, ಮೂಡ್ ಕೆಡಿಸತೊಡಗಿದಾಗಲೇ ...ಹೇಳುವುದು ಒಂದು, ಮಾಡುವುದು ಇನ್ನೊಂದು... ಅಂತ ಆಗೋದು...
ಯಾವುದನ್ನೂ ಆಸ್ವಾದಿಸುದಕ್ಕಾಗದೇ ಸಂಶಯವೋ, ಆತಂಕವೋ, ಅತೃಪ್ತಿ ಅನ್ನುವ ಭಾವ ಸಂಘರ್ಷದಿಂದ ಇರುವ ಮನಶ್ಶಾಂತಿಯನ್ನೂ ಕೆಡಿಸಿಕೊಳ್ಳುವುದು....
ಜಸ್ಟ್ ಬಸ್ ಮಿಸ್ ಆದಾಗ, ಯಾರೋ ಆತ್ಮೀಯರು ಕರೆ ಸ್ವೀಕರಿಸದಾಗ, ಮೆಸೇಜಿಗೆ ರಿಪ್ಲೈ ಮಾಡದಾಗ, ಎಂದಿನಂತೆ ಮಾತನಾಡದೆ ಮಾತಿನ ಧಾಟಿ ತುಸು ತಪ್ಪಿದಾಗ, ಹೆಚ್ಚೇಕೆ ಹತ್ತು ನಿಮಿಷ ವಾಟ್ಸಾಪ್ ಹ್ಯಾಂಗ್ ಆದಾಗಲೂ ಏನೋ ಕಳೆದುಕೊಂಡಂತೆ ಪರಿತಪಿಸುವಂತಾಗುತ್ತದೆಯೇ...
ಆಗೆಲ್ಲ ಪರಿಸ್ಥಿತಿಗೆ ಹೊಂದಿಕೊಂಡು ನಾರ್ಮಲ್ ಆಗಿರಲು ಪ್ರಯತ್ನಿಸದೇ ಹೋದರೆ ಬದುಕಿನಲ್ಲಿ ತುಂಬಾ ನಷ್ಟ ಎದುರಾಗಬಹುದು...

-----------

ನಮ್ಮಿಂದಾಗಿ ಮೂಡ್ ಹಾಳಾದರೂ, ಬೇರೆಯವರಿಂದ ನಮ್ಮ ಮೂಡ್ ಹಾಳಾದರೂ ಅಂತಿಮವಾಗಿ ತೊಳಡುವವರು ನಾವೇ... ದಿನದ ಎಲ್ಲಾ ಕೆಲಸದಲ್ಲೂ ಸಹಜವಾಗಿ ತೊಡಗಿಸಿಕೊಳ್ಳಲಾಗದೆ, ಒಂದೇ ಚಿಂತೆಯನ್ನು ತಲೆಗೆ ಹಚ್ಚಿಕೊಂಡು ಪರದಾಡುತ್ತೇವೆ ಹೌದ... ಬದುಕನ್ನು ಸೀರಿಯಸ್ ಆಗಿ ತೆಗೆದುಕೊಂಡವರು, ತುಸು ಹೆಚ್ಚೇ ಸ್ವಾಭಿಮಾನಿಗಳಾಗಿರುವವರು ಖಂಡಿತ ಶಾಂತಿ ಕಳೆದುಕೊಳ್ಳುತ್ತಾರೆ.
ನಿಮ್ಮ ಮೂಡ್ ಕೆಡಿಸಿದ ವಿಚಾರ ಸಣ್ಣದೇ ಇರಬಹುದು. ಅದರ ಸುತ್ತಮುತ್ತ ಇನ್ನಷ್ಟು ಚಿಂತೆ (ತನೆ) ಸೇರಿ, ಮತ್ತೆ ಇಗೋ ಪ್ಲಾಬ್ಲಂ ಆಗಿ... ಇಷ್ಟುದ್ದ ಇದ್ದ ಸಮಸ್ಯೆ ಅಷ್ಟೆತ್ತರಕ್ಕೆ ಬೆಳೆದು ಹೆಮ್ಮರವಾಗಬಹುದು...

--------------------

ದಿನಾ ಮಾತನಾಡುತ್ತಿದ್ದ ಸ್ನೇಹಿತನ, ಆತ್ಮೀಯರ ಮಾತಿನ ಧಾಟಿ ಬದಲಾಗಿದೆಯಾ.... ನೀವು ತುಂಬ ಗೌರವಿಸುತ್ತಿದ್ದ ವ್ಯಕ್ತಿಗೊಂದು ಮೆಸೇಜ್ ಕಳುಹಸಿದರೂ ರಿಪ್ಲೈ ಮಾಡದೆ ನಿಮ್ಮನ್ನು ಅವಾಯ್ಡ್ ಮಾಡ್ತಾ ಇದ್ದಾರೆ ಅನ್ಸುತ್ತ.... ಕಚೇರಿಯಲ್ಲೋ, ಕ್ಲಾಸಿನಲ್ಲೋ ಯಾರೋ ನಿಮ್ಮನ್ನೇ ನೋಡಿ ಅಪಹಾಸ್ಯ ಮಾಡಿದ ಹಾಗೆ, ನಕ್ಕ ಹಾಗೆ ಭಾಸವಾಗುತ್ತದೆಯಾ... ಅಥವಾ ಸಮಯ ಸಂದರ್ಭ ನೋಡದೆ ನಾವು ಆಡಿದ ಮಾತು ಇನ್ಯಾರಿಗೋ ಹರ್ಟ್ ಆಗಿದೆ ಅನ್ಸಿ ಮತ್ತೆ ತೊಳಲಾಡುತ್ತಿದ್ದೀರ...ನಿಮ್ಮ ಪಕ್ಕದವರ ಬಗ್ಗೆ ಅಧಿಕ ಪ್ರಸಂಗಿಯೊಬ್ಬ ಹುಳಬಿಟ್ಟುು ತಲೆ ಕೆಡಿಸಿ ಹಾಕಿದ್ದಾರ....
ಈ ಎಲ್ಲಾ ಉದಾಹರಣೆಗಳಲ್ಲಿ ಮೂಡ್ ಕೆಡಲು ಸಾಧ್ಯ...

--------

ದಿನದ 24 ಗಂಟೆ ಮೊಬೈಲ್ ನೆಟ್ ಆನ್ ಇರಿಸುವ ವ್ಯಕ್ತಿಗೆ ವಾಟ್ಸಾಪ್, ಫೇಸ್ ಬುಕ್ ಪುಟ ತೆರೆದುಕೊಳ್ಳದೆ ಹ್ಯಾಂಗ್ ಆದಾಗ, ಯಾರಗೋ ಕರೆ ಮಾಡಲು ಯತ್ನಿಸಿ ಎಷ್ಟು ಹೊತ್ತಾದರೂ ಕಾಲ್ ಕನೆಕ್ಟ್ ಆಗದಿದ್ದಾಗ, ಸೆಕೆಂಡ್ಗಳ ಅಂತರದಲ್ಲಿ ಬಸ್ ತಪ್ಪಿದಾಗ, ಅಷ್ಟೇ ಯಾಕೆ, ಆಸಕ್ತಿಯಿಂದ ಟಿ.ವಿ.ನಲ್ಲಿ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದಾಗ ಕರೆಂಟ್ ಕೈಕೊಟ್ಟರೂ ಸಿಟ್ಟು ಒದ್ದುಕೊಂಡು ಬರಬಹುದು, ಅಕ್ಕಪಕ್ಕದವರ ಮೇಲೆ ಚೀರಾಡಬಹುದು, ಯಾರಲ್ಲೂ ಮಾತನಾಡದೆ ಮೌನಿಗಳಾಗಬಹುದು... ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆ ಕಳೆದುಕೊಳ್ಳಬಹುದು. ಕಾರಣವಿಲ್ಲದೆ ಜಗಳವಾಡಬಹುದು...ಹೀಗೆ ಎಲ್ಲಾ ಉಲ್ಟಾ ಪಲ್ಟಾ ಆಗುತ್ತದೆ....


------------

ವಾಸ್ತವದಲ್ಲಿ ಸಮಸ್ಯೆಯ ಮೂಲ ಹುಡುಕಿ ಪರಿಹರಿಸುವ ಬದಲು, ವಾಸ್ತವ ಅರ್ಥ ಮಾಡಿಕೊಳ್ಳುವ ಬದಲು ಸುಖಾ ಸುಮ್ಮನೆ ಟೆನ್ಶನ್ ಮಾಡಿಕೊಳ್ತೇವೆ. ಟೆನ್ಶನ್ ಮಾಡ್ಕೊಳ್ಳೋದ್ರಿಂದ ಸಮಸ್ಯೆ ಪರಿಹಾರ ಆಗೋದಿಲ್ಲ ಅಂತ ಗೊತ್ತು. ಆದರೆ, ಪರಿಸ್ಥಿತಿ ಹಾಗೆ ಮಾಡಬಹುದು...
ಉದಾಹರಣೆಗೆ ದುರ್ಗಮ ಮಾರ್ಗದಲ್ಲಿ ಬೈಕಿನಲ್ಲಿ ಹೋಗುತ್ತಿರುವಾಗ ಏಕಾಏಕಿ ಟೈರ್ ಪಂಕ್ಚರ್ ಆದರೆ ಅಳುತ್ತಾ ಕೂದರೆ ಆಗುತ್ತಾ, ಅಥವಾ ಸಿಟ್ಟಿನಲ್ಲಿ ಬೈಕಿಗೆ ತುಳಿದರೆ ಆಗುತ್ತಾ, ಕೆಟ್ಟ ರಸ್ತೆ ಮಾಡಿದ ಕಂಟ್ರಾಕ್ಚರ್ ದಾರನಿಗೆ ಶಾಪ ಹಾಕಿದರೆ ಆಗುತ್ತಾ, ಏನೂ ಪ್ರಯೋಜನ ಇಲ್ಲ. ಪಂಕ್ಚರ್ ಅಂಗಡಿ ಹುಡುಕಿ ರಿಪೇರಿ ಮಾಡುವುದು ಒಂದೇ ಪರಿಹಾರ. ಅಥವಾ ಲಾರಿಗೆ ಬೈಕ್ ಹೇರಿಕೊಂಡು ಪೇಟೆಗೆ ಕೊಂಡು ಹೋಗಬಹುದು..
ನೀವು ಇನ್ನೂ ಕೂಲ್ ಮೈಂಡೆಡ್ ಆಗಿದ್ದರೆ, ಬೇರೆ ವಾಹನ ಬರುವ ವರೆಗೆ ಅಲ್ಲೇ ಕುಳಿತು ಸುತ್ತಲ ಪರಿಸರ ವೀಕ್ಷಣೆ ಮಾಡಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬಹುದು... ಮೊಬೈಲಿನಲ್ಲಿ ಹತ್ತಾರು ಫೋಟೊ ಕ್ಲಿಕ್ಕಿಸಬಹುದು... ಈ ವರೆಗೆ ನೋಡದ ಊರು ನೋಡಿದೆ ಅಂತ ಸಮಾಧಾನ ಪಟ್ಟುಕೊಳ್ಳಬಹುದು... ಅದು ಪರಿಸ್ಥಿತಿಯನ್ನು ಧನಾತ್ಮಕವಾಗಿ, ಕೂಲಾಗಿ ತೆಗೆದುಕೊಳ್ಳುವವರು ಅನುಸರಿಸಬಹುದಾದ ಕ್ರಮ....
ಹೇಳೋದು ಸುಲಭ, ಆದರೆ ಟೆನ್ಶನ್ ಹುಟ್ಟಿಕೊಂಡಾಗ ಕೂಲ್ ಆಗಿರೋದು ಎಷ್ಟು ಕಷ್ಟ ಅಂತ ಅನುಭವಿಸಿದವರಿಗೇ ಗೊತ್ತು ಅಲ್ವ....
ಆದರೂ...
ಟೆನ್ಶನ್ ಅಂತ ಟೆನ್ಶನ್ ಮಾಡ್ಕೊಂಡು, ಇನ್ನಷ್ಟು ಟೆನ್ಶನ್ ಹೆಚ್ಚಿಸಿಕೊಂಡು, ಟೆನ್ಶನ್ ಗೆ ಕಾರಣ ಹುಡುಕದೆ, ಟೆನ್ಶನ್ ನ್ನೇ ದೊಡ್ಡ ಟೆನ್ಶನ್ ಅಂದ್ಕೊಂಡು, ತಾನೂ ಟೆನ್ಶನ್ ಮಾಡಿ, ಬೇರೆಯೋರಿಗೂ ಟೆನ್ಶನ್ ಕೊಟ್ಟ ಹಾರಾಡುವ ಹೊತ್ತಿಗೆ ಟೆನ್ಶನ್ ಕಡಿಮೆಯಾಗಿರೋದಿಲ್ಲ, ಮತ್ತೊಂದು ಟೆನ್ಶನ್ ಶುರುವಾಗಿರುತ್ತದೆ, ಅಷ್ಟೇ....

-------------


ಪ್ರತಿ ಸಂದಿಗ್ಧತೆಗೆ ಒಂದು ಕಾರಣ, ಒಂದು ಮೂಲ ಇರುತ್ತದೆ. ಶಾಂತರಾಗಿ ಯೋಚಿಸಿದರೆ ಅಲ್ಲಿಗೆ ತಲುಪಿ ಸ್ವಲ್ಪ ತಡಕಾಡಿದರೆ ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯ. ಅದರ ಬದಲು ಗೊಂದಲವನ್ನು ಇಗೋ ಕೈಗೆ ಕೊಟ್ಟರೆ ಕಳೆದುಕೊಳ್ಳುವವರು ನಾವೇ... ನಮಗೆ ಸಿಟ್ಟು ಬರಿಸಿದವರು, ಮೂಡ್ ಕೆಡಿಸಿದವರು ತಮ್ಮ ಪಾಡಿಗೆ ಹಾಯಾಗಿರುತ್ತಾರೆ. ನಾವು ಮಾತ್ರ ಏನೋ ಕಳಕೊಂಡವರಂತೆ ತೊಳಲಾಡುವವರು ಅನ್ನುವುದು ನೆನಪಿರಲಿ...

-------------------

ಹಾಗಾದರೆ.....ಮೂಡ್ ಕಾಯ್ದುಕೊಳ್ಳಲು ಏನು ಮಾಡಬಹುದು....
-ಮೊದಲು ಸಮಸ್ಯೆ ಎಲ್ಲಿ ಹುಟ್ಟಿಕೊಂಡಿತು ಅಂತ ಚಿಂತಿಸಿ, ಪರಿಹಾರದ ದಾರಿ ಹುಡುಕುವುದು ಅತ್ಯಂತ ಪ್ರಾಕ್ಟಿಕಲ್....
-ಮಾತಿನಲ್ಲೋ, ವರ್ತನೆಯಲ್ಲೋ ನಮ್ಮಿಂದ ಬೇರೆಯೋರಿಗೆ, ಅಥವಾ ಬೇರೆಯೋರಿಂದ ನಮಗೆ ಹರ್ಟ್ ಆಗಿದ್ದರೆ, ಯಾಕೆ ಹಾಗಾಯ್ತು ಅಂತ ಚಿಂತಿಸಿ, ನಮ್ಮಿಂದ ತಪ್ಪಾಗಿದ್ದರೆ ಬೇಷರತ್ ಕ್ಷಮೆ ಯಾಚಿಸಿ, ಬೇರೆಯೋರಿಂದ ತಪ್ಪಾಗಿದ್ದರೆ ಅವರು ಅದನ್ನು ಅರಿತು ಕ್ಷಮೆ ಯಾಚಿಸಿದರೆ ಉದಾರವಾಗಿ ಕ್ಷಮಿಸಿಬಿಡಿ. ಯಾಕೆಂದರೆ ಹಲವು ಬಾರಿ ಬೇಕೆಂದು ತಪ್ಪು ಆಗಿರುವುದಿಲ್ಲ. ಪ್ರಮಾದ ಆಗಿರಬಹುದು. ಆದರೆ ಕೆಲವೊಮ್ಮೆ ಬೇಜವಾಬ್ದಾರಿಯಿಂದಲೋ, ತಪ್ಪು ಕಲ್ಪನೆಯಿಂದಲೋ ತಪ್ಪುಗಳು ನಡೆದಹೋಗಬಹುದು. ಆಗೆಲ್ಲಾ ಮಾಡಿದ ತಪ್ಪನ್ನು ಸಮರ್ಥಿಸಿಕೊಂಡು (ಇಗೋ ಪ್ರಾಬ್ಲಂ) ಮತ್ತಷ್ಟು ಸಮಸ್ಯೆಗಳನ್ನು ಮೂರ್ಖತನ. ಹಾಗೆಯೇ ಸಣ್ಣ ಸಣ್ಣ ಕಾರಗಳಿಗೆ ಸಂಬಂಧಗಳನ್ನು ಕಡಿದುಕೊಳ್ಳುವದು ಕೂಡಾ...
ಬೇರೆಯೋರೂ ಅಷ್ಟೆ, ಉದ್ದೇಶಪೂರ್ವಕವಾಗಿ ತಪ್ಪು ಮಾಡದೇ ಇದ್ದು, ಅದಕ್ಕಾಗಿ ವಿಷಾದಿಸಿದರೆ ಅಲ್ಲಿಗೇ ವಿಷಯ ಮುಗಿಸಿಬಿಡಿ... ಆದರೆ, ಪದೇ ಪದೇ ಅಂತಹದ್ದೇ ತಪ್ಪುಗಳುಮರುಕಳಿಸುತ್ತಿದ್ದರೆ ಆ ಬಗ್ಗೆ ಗಂಭೀರವಾಗಿ ಯೋಚಿಸಿ. ಇಲ್ಲವಾದರೆ, ಇಬ್ಬರಿಗೂ ಮನಶ್ಶಾಂತಿ ಇರ್ಲಿಕಿಲ್ಲ. 
-ಸಂವಹನ ಕೊರತೆಯಂದಲೋ ತಪ್ಪು ಕಲ್ಪನೆಯಿಂದಲೋ ಇಬ್ಬರೊಳಗೆ ವೈಮನಸ್ಯ ಹುಟ್ಟಿಕೊಂಡರೆ, ಅವರು ನಿಮ್ಮ ಆತ್ಮೀಯರಾಗಿದ್ದರೆ ನೇರವಾಗಿ ಮಾತನಾಡಿ ಪರಿಹಾರ ಕಂಡುಕೊಳ್ಳಬಹುದು. ಅದರ ಬದಲು ಹಿಂದೆ ಮುಂದೆ ನೋಡದೆ ಬೈದು, ಕೂಗಾಡುವ ಬದಲು ಮೌನವಾಗಿಯಾದರೂ ಪರಿಸ್ಥಿತಿ ಕಾಯ್ದುಕೊಳ್ಳುವದು ಬೆಟರ್.
-ನಿಮ್ಮ ಮೂಡ್ ಯಾವ ಕಾರಣಕ್ಕೆ ಕಂಟ್ರೋಲ್ ಆಗುತ್ತಿಲ್ಲವೆಂದಾದರೆ, ಅಥವಾ ಏಕಾಗ್ರತೆ ಸಿಗುತ್ತಿಲ್ಲವೆಂದಾದರೆ ಸ್ವಲ್ಪ ಹೊತ್ತಾದರೂ ಗಮನ ಬೇರೆಡೆ ಹರಿಸಿ... ಇಷ್ಟದ ಹಾಡು ಕೇಳಿ. ಎಷ್ಟೋ ದಿನ ಮಾತನಾಡದೆ ಇದ್ದ ಒಬ್ಬ ಕ್ಲಾಸ್ ಮೇಟ್ ಗೋ, ಫ್ರೆಂಡ್ ಗೋ ಅಚ್ಚರಿಯ ಕರೆ ಮಾಡಿ ಮಾತನಾಡಿ, ಆತ್ಮೀಯರೊಡನೆ ಒಂದು ಆತ್ಮೀಯ ಚಾಟ್ ನಡೆಸಿ, ಹಳೆ ಆಟೋಗ್ರಾಫ್ ಪುಸ್ತಕ ತೆಗೆದು ಓದಿ. ಅಥವಾ ನಿಮ್ಮ ಬಗ್ಗೆ ಭರವಸೆ ಮೂಡಿಸುವ ವಿಚಾರಗಳನ್ನು ನೆನಪುಮಾಡಿಕೊಳ್ಳಿ....
-ಕಾಲಕ್ಕೆ ಎಲ್ಲದರ ತೀವ್ರತೆ ಕಡಿಮೆ ಮಾಡುವ ಶಕ್ತಿಯಿದೆ. ಹಾಗೆಯೇ ಕೆಟ್ಟು ಹೋದ ಮೂಡ್ ಕೂಡಾ.... ತನ್ನಿಂತಾನೆ ಸುಧಾರಿಸಬಹುದು, ಆದರೆ, ಅದಕ್ಕೂ ಮೊದಲು ಪರಿಸ್ಥಿತಿ ಇನ್ನಷ್ಟು ಕೆಟ್ಟು ಹೋಗದಿರಲಿ ಅಷ್ಟೆ....
----ಮಾತೆಲ್ಲ ಮುಗಿದ ಮೇಲೆ ಕಾಡುವ ದನಿ ವಿಷಾದ ಮೂಡಿಸದಿರಲಿ... ಹೇಳುವುದು ಏನೋ ಉಳಿದುಹೋಗಿದೆ ಅನ್ನುವ ನಿರಾಸೆ ಕಾಡದಿರಲಿ....
(ತಪ್ಪಿ ಬ್ಲಾಗ್ ಓದಿದ್ದರೆ ಯಾರಾದರೂ ಮೂಡಬಹುದಾದ ಪ್ರಾಕ್ಟಿಕಲ್ ಪ್ರಶ್ನೆ... ಈ ಥರ ಹೇಳೋದು ತುಂಬ ಸುಲಭ, ಆಚರಿಸೋರು ಯಾರು!!! :)

No comments: