ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡಿದ ಇಸ್ರೋ




ಈ ಮಧ್ಯೆ ಇಸ್ರೋ ಸದ್ದಿಲ್ಲದೆ ಮತ್ತೆರಡು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸೌರಮಂಡಲದಲ್ಲಿ ಎರಡನೇ ಗ್ರಹವಾಗಿರುವ ಶುಕ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಆ ಗ್ರಹದ ಕುರಿತು ಅತ್ಯಮೂಲ್ಯ ಮಾಹಿತಿಯನ್ನು ಹೆಕ್ಕುವ ಉದ್ದೇಶದಿಂದ ಶುಕ್ರ ಗ್ರಹಕ್ಕೆ ಉಪಗ್ರಹ ಯಾತ್ರೆ ಕೈಗೊಳ್ಳಲು ಇಸ್ರೋ ಮುಂದಾಗಿದೆ. 2013ರಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಕೈಗೊಂಡು ವಿಶ್ವವಿಖ್ಯಾತವಾಗಿದ್ದ ಇಸ್ರೋ, ಮತ್ತೊಮ್ಮೆ ಮಂಗಳಯಾನ ಕೈಗೊಳ್ಳಲು ಸಿದ್ಧತೆ​ಯಲ್ಲಿ ತೊಡ​ಗಿದೆ. 
 
ಕೃಷ್ಣಮೋಹನ ತಲೆಂಗಳ ಪತ್ರಕರ್ತರು 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆ ಮತ್ತು ಭವಿಷ್ಯದ ನೋಟ ಆಕಾ​ಶ​ಕ್ಕೆ ರಾಕೆಟ್‌, ಕ್ಷಿಪ​ಣಿ​ಗಳ ಉಡ್ಡ​ಯ​ನಕ್ಕೆ ಕೋಟಿ​ಗ​ಟ್ಟಲೆ ದುಡ್ಡು ಸುರಿದು ಏನು ಮಾಡ​ಲಿ​ಕ್ಕಿ​​ದೆ ಎನ್ನುವವರ ಉಡಾ​ಫೆಯ ಮಾತು​ಗ​ಳಿಗೆ ಇಸ್ರೋ ಮತ್ತೊಮ್ಮೆ ಹೀಗೊಂದು ಸಮ​ರ್ಪ​ಕ ಉತ್ತರ ಕೊಟ್ಟಿದೆ, ತನ್ನ ವರ್ಚ​ಸ್ಸನ್ನು ಆಗ​ಸ​ದಲ್ಲಿ ಮಿನು​ಗಿ​ಸಿದೆ. ಈ ಮೂಲಕ ಭಾರತ ಭವಿ​ಷ್ಯ​ದಲ್ಲಿ ಉಪಗ್ರಹಗಳ ಉಡ್ಡ​ಯ​ನಕ್ಕೆ ಹೆಬ್ಬಾ​ಗಿ​ಲಾ​ಗಿ ತೆರೆದುಕೊಂಡಿದೆ.

ಹೌದು, ಒಂದೇ ಉಡಾವಣಾ ವಾಹಕದ ಮೂಲಕ ಭಾರ​ತದ ಹೆಮ್ಮೆಯ ಇಸ್ರೋ (ಇಂಡಿ​ಯನ್‌ ಸ್ಪೇಸ್‌ ರಿಸ​ಚ್‌ರ್‍ ಆರ್ಗ​ನೈ​ಸೇ​ಶ​ನ್‌) ಉಡ್ಡ​ಯನ ನೌಕೆ (ಪಿಎಸ್‌ಎಲ್‌ವಿ-37) ದಾಖಲೆಯ 104 ಉಪಗ್ರಹಗಳನ್ನು ಬುಧ​ವಾರ ಮುಂಜಾನೆ ಯಶಸ್ವಿ​ಯಾಗಿ ಉಡ್ಡಯನ ಮಾಡಿತು. 2014​ರಲ್ಲಿ ರಷ್ಯಾ ಒಂದೇ ರಾಕೆಟಿನಲ್ಲಿ 37 ಉಪಗ್ರಹ​ಗಳ​ನ್ನು ಕಕ್ಷೆಗೆ ಸೇರಿಸಿದ್ದೆ ಈವರೆಗಿನ ದಾಖಲೆಯಾ​ಗಿತ್ತು. ಜಾಗತಿಕ ಬಾಹ್ಯಾಕಾಶ ಇತಿಹಾಸದಲ್ಲೇ ಯಾವುದೇ ದೇಶ ಒಂದೇ ಉಡಾವಣೆಯಲ್ಲಿ ಶತಕ ಬಾರಿಸಿಲ್ಲ. ಈ ಹಿಂದೆ 2015ರಲ್ಲಿ ಏಕಕಾಲಕ್ಕೆ 23 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿ​ತ್ತು ಎಂಬುದು ಕೂಡ ಗಮನಾರ್ಹ. ಇದು ಇಸ್ರೋದ ಸತತ 38ನೇ ಉಡ್ಡಯನ.
ಬುಧ​ವಾರ ಕಕ್ಷೆ​ಯತ್ತ ಚಿಮ್ಮಿದ 104 ಉಪ​ಗ್ರಹ​​ಗಳಲ್ಲಿ ಮೂರು ಮಾತ್ರ ಭಾರತದ್ದು, 101 ವಿದೇಶ​ದ್ದು. ಈ ಪೈಕಿ ಅಮೆರಿಕದ 96 ಉಪಗ್ರಹ​ಗಳೂ ಸೇರಿವೆ ಎಂಬುದು ವಿಶೇಷ. ಇಸ್ರೇಲ…, ಕಜಕಿಸ್ತಾನ, ನೆದರ್ಲೆಂಡ್‌, ಸ್ವಿಝರ್ಲೆಂಡ್‌, ಯುಎಇ​ಯ ಉಪಗ್ರಹಗಳೂ ಈ ಗುಂಪಿ​ನಲ್ಲಿ ಇದ್ದ​ವು. ಇಷ್ಟುಮಾತ್ರ​ವಲ್ಲ, ಒಮ್ಮೆಲೇ 400 ನ್ಯಾನೋ ಉಪಗ್ರಹಗಳನ್ನು ಚಿಮ್ಮಿ​ಸುವ ಸಾಮ​ರ್ಥ್ಯ ಇಸ್ರೋಗೆ ಇದೆ ಎಂದು ನಿವೃತ್ತ ಬಾಹ್ಯಾ​ಕಾ​ಶ ವಿಜ್ಞಾನಿ ಜಿ.ಮಾಧವನ್‌ ನಾಯರ್‌ ಹೇಳಿ​ರು​ವು​ದು ಭವಿ​ಷ್ಯದ ಇಸ್ರೋದ ತಾಕ​ತ್ತನ್ನು ಕಟ್ಟಿ​​​ಕೊ​ಟ್ಟಿದೆ. ಮುಂಬರುವ ಮಾಚ್‌ರ್‍ನಲ್ಲಿ ಸಾರ್ಕ್ ದೇಶಗಳಿಗೆ ಅನು​ಕೂಲವಾಗುವ ವಿಶೇಷ ಉಪ​ಗ್ರಹ ಉಡಾ​ವಣೆ​ಯೂ ಇಸ್ರೋ ಮೂಲಕ ನಡೆಯಲಿದೆ. ಒಟ್ಟು ಎರಡು ಉಪಗ್ರಹಗಳು ಈ ಸಂದರ್ಭದಲ್ಲಿ ನಭೋಮಂಡಲ ತಲುಪುವ ನಿರೀಕ್ಷೆ ಇದೆ.
ಅಮೆ​ರಿಕ, ರಷ್ಯಾ, ಚೀನಾ, ಐರೋಪ್ಯ ಒಕ್ಕೂಟ​ಗಳಿಗೂ ಉಪ​ಗ್ರಹ ಉಡಾ​ವಣೆ ಸಾಮ​ರ್ಥ್ಯ​​ವಿದೆ. ಆದರೆ ಇಸ್ರೋದ ಉಡಾವಣೆಯ ದರ ಅಗ್ಗವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಕಂಪನಿ​ಗಳು ಉಪಗ್ರಹ ಉಡಾವಣೆಗೆ ಭಾರ​ತ​ವ​ನ್ನೇ ನೆಚ್ಚಿ​ಕೊ​ಳ್ಳು​ತ್ತಿವೆ. ಫೆ.15ರ ಪ್ರಾಜೆಕ್ಟಿಗೆ ಇಸ್ರೋ ಮಾಡಿದ ಖರ್ಚು .100 ಕೋಟಿ. ಇದೇ ಉಡಾ​ವಣೆ ಅಮೆರಿಕದ ಸ್ಪೇಸ್‌ ಎಕ್ಸ್‌ ಮೂಲ​ಕ ಆಗಿ​ದ್ದರೆ, .400 ಕೋಟಿ, ನಾಸಾ ಮೂಲಕ ಆಗಿದ್ದರೆ .669 ಕೋಟಿ ವೆಚ್ಚವಾಗುತ್ತಿತ್ತು. ಇಸ್ರೋದ ಮಿತ​ವ್ಯ​ಯದ ಕಾರ್ಯಾ​ಚ​ರಣೆಯ ಜೊತೆಗೆ ಯಶಸ್ವಿ ಫಲಿ​​​ತಾಂಶ ಜಾಗತಿಕ ಮಟ್ಟದಲ್ಲಿ ಉಪ​ಗ್ರಹ ಉಡಾ​​​ವಣೆ, ರಾಕೆಟ್‌ ತಂತ್ರ​ಜ್ಞಾ​ನ​ದಲ್ಲಿ ಅವಕಾಶ​ಗಳ ಮಹಾಪೂರ ದೇಶಕ್ಕೆ ಹರಿದುಬರಲಿದೆ. ಮುಂಬ​ರುವ ಐದು ವರ್ಷಗಳ ಅವಧಿಯಲ್ಲಿ ಸುಮಾರು 3 ಸಾವಿರ ಉಪಗ್ರಹಗಳು ಜಾಗ​ತಿ​ಕ​ವಾಗಿ ಉಡಾವಣೆಯಾಗುವ ನಿರೀಕ್ಷೆಯಿದೆ. ಇದೀಗ ಅನೇಕ ದೇಶಗಳು ತಮ್ಮ ಉಪ​ಗ್ರ​ಹ​ಗಳ ಉಡಾ​ವ​ಣೆ​ಗಾಗಿ ಭಾರ​ತ​ದ​ತ್ತ ಮುಖ ಮಾಡಲಿದ್ದು, ಇದು ಆರ್ಥಿಕವಾಗಿಯೂ ದೇಶಕ್ಕೆ ಲಾಭ ತಂದು ಕೊಡಬಲ್ಲ ವ್ಯವಹಾರವಾಗಿದೆ.
48 ವರ್ಷ​ಗಳ ಇತಿ​ಹಾ​ಸ​ವಿರುವ, 1969ರಲ್ಲಿ ಸ್ಥಾಪನೆಯಾದ ಇಸ್ರೋ ಭಾರತದ ಬಾಹ್ಯಾಕಾಶ ಏಜೆನ್ಸಿ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ‘ರಾಷ್ಟಾ್ರಭ್ಯುದಯಕ್ಕೆ ಬಾಹ್ಯಾಕಾಶ ತಂತ್ರಜ್ಞಾನ' ಇದರ ಧ್ಯೇಯ. ಬಾಹ್ಯಾಕಾಶ ಇಲಾಖೆ ನಿರ್ವಹಿಸುವ ಇಸ್ರೋದ ಚಟುವಟಿಕೆ​ಗಳ ವರದಿಗಳು ನೇರವಾಗಿ ದೇಶ​ದ ಪ್ರಧಾನಿ​ಯ​ನ್ನು ತಲಪುತ್ತವೆ. ಸೋವಿಯಟ್‌ ಯೂನಿಯನ್‌ನಿಂದ 1975ರಲ್ಲಿ ಉಡಾವಣೆಯಾದ ಆರ್ಯ​ಭಟ, ಇಸ್ರೋ ನಿರ್ಮಿಸಿದ ಪ್ರಥಮ ಉಪ​ಗ್ರಹ. 80ರ ದಶ​ಕದ ತನಕ ಉಪ​ಗ್ರಹ ಉಡಾ​​ವ​ಣೆಗೆ ವಿದೇಶಿ ಉಡ್ಡ​ಯನ ಕೇಂದ್ರ​ಗಳ ಮೇಲೆ ಭಾರತದ ಅವ​ಲಂಬಿಸಿತ್ತು. ಬಳಿಕ, ರಾಕೆಟ್‌ ತಂತ್ರ​ಜ್ಞಾನದಲ್ಲಿ ಸ್ವಾವ​ಲಂಬ​ನೆ​ ಸಾಧಿಸಿ 1980ರಲ್ಲಿ ಪ್ರಥಮ ಬಾರಿಗೆ ಭಾರತದಲ್ಲೇ ತಯಾರಿಸಿದ ಎಸ್‌ಎಲ್‌ವಿ-3 ಉಡಾವಣಾ ವಾಹನ ಮೂಲಕ ರೋಹಿಣಿ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸಲಾಯಿತು. ನಂತರದ ದಿನಗಳಲ್ಲಿ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (ಪಿಎಸ್‌ಎಲ್‌ವಿ) ಹಾಗೂ ಜಿಯೋಸಿಂ​ಕ್ರೋನಸ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (ಜಿಎಸ್‌ಎಲ್‌ವಿ) ರಾಕೆಟ್‌ಗಳನ್ನು ಉಪಗ್ರಹ ಉಡಾವಣೆಗಾಗಿ ಇಸ್ರೋ ಅಭಿವೃದ್ಧಿಪಡಿಸಿತು. ಈ ರಾಕೆಟ್‌ಗಳ ಸಹಾಯದಿಂದ ಸಾಕಷ್ಟುಸಂವಹನ ಆಧಾರಿತ ಹಾಗೂ ಭೂವೀಕ್ಷಕ ಉಪಗ್ರಹಗಳನ್ನು ಉಡಾಯಿಸಲಾಗಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಸ್ಪೇಸ್‌ ರಿಸಚ್‌ರ್‍ ಸೆಂಟರ್‌ ರಾಕೆಟ್‌ ಉಡ್ಡ​ಯನ ಕೇಂದ್ರ ಇಸ್ರೋದ ಬಹು​ದೊಡ್ಡ ಆಸ್ತಿ. 2005ರಲ್ಲಿ ಇಲ್ಲಿ ಎರಡನೇ ಲಾಂಚ್‌ ಪ್ಯಾಡ್‌ ಸ್ಥಾಪನೆಯಾಯಿತು. 145 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಈ ದ್ವೀಪ ಕೇಂದ್ರ 27 ಕಿ.ಮೀ.ಯಷ್ಟುಕಡಲತಡಿಯನ್ನು ಆವರಿ​ಸಿ​ದೆ. 1971ರ ಅ.9ರಂದು ಮೊದಲ ಪ್ರಯತ್ನದಲ್ಲಿ ರೋಹಿಣಿ 215 ಹೆಸರಿನ ಉಪಗ್ರಹದ ಉಡ್ಡಯನ ನಡೆಯಿತು. ಇಸ್ರೋ ಈ ತನಕ 226 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಈ ಪೈಕಿ 179 ವಿದೇಶಿ ಉಪಗ್ರಹಗಳಾಗಿವೆ.
ಇಸ್ರೋ 2008ರ ಅ.22ರಂದು ಉಡಾ​ಯಿ​ಸಿದ ಚಂದ್ರ ಕಕ್ಷಾಗಾಮಿ ‘ಚಂದ್ರಯಾನ 1' ಹಾಗೂ 2014 ಸೆ.24ರಂದು ಕಳುಹಿ​ಸಿದ ‘ಮಂಗಳ​ಯಾನ' ಕಕ್ಷಾಗಾಮಿ ಉಪಗ್ರಹಗಳ ಯಶಸ್ವಿ ಉಡಾವಣೆ ಇಸ್ರೋ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು. ಈ ಮೂಲಕ ತನ್ನ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಮಂಗಳ​ಯಾನ ಕೈಗೊಂಡ ಏಷ್ಯಾದ ಮೊದಲನೇ ದೇಶ, ವಿಶ್ವದ ನಾಲ್ಕನೇ ಸಂಸ್ಥೆ ಎಂಬ ಹೆಗ್ಗಳಿಕೆ​ಯನ್ನು ಇಸ್ರೋ ಗಳಿಸಿದೆ. 2016ರ ಜೂ.18​ರಂದು ಸಿಂಗಲ್‌ ಪ್ಲೇಬೋರ್ಡ್‌ನಲ್ಲಿ 20 ಉಪ​ಗ್ರಹ ಉಡಾಯಿಸಿದ್ದು ಭಾರ​ತೀಯ ಉಡ್ಡ​​​​​ಯನದ ಪುಟ​ಗ​ಳ​ಲ್ಲಿ ಹೊಸ ಇತಿಹಾಸ ಬರೆ​ಯಿತು. ಇದೀಗ ಫೆ.15ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಕೇಂದ್ರದಿಂದ ಏಕಕಾಲದಲ್ಲಿ 104 ಉಪಗ್ರಹ ಉಡಾಯಿಸಿದ್ದು ವಿಶ್ವದಾಖಲೆಯಾಗಿದೆ.
ಚಂದ್ರಯಾನ 1 ಚಂದ್ರನ ಮೇಲೆ ಭಾರತದ ಮೊದಲ ಪ್ರಯೋಗವಾಗಿದೆ. 2008ರ ಅ.22ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಅಂತರಿಕ್ಷಕ ಕೇಂದ್ರದಿಂದ ನಭೋಮಂಡಲಕ್ಕೆ ಪಿಎಸ್‌ಎಲ್‌ವಿ ಸಹಾಯದಿಂದ ಜಿಗಿದ ಚಂದ್ರ ಕಕ್ಷಾ​ಗಾಮಿ 2008 ನ.8ರಂದು ಗಮ್ಯ ತಲುಪಿತು. ಹೈರೆಸೊಲ್ಯೂಶನ್‌ ರಿಮೋಟ್‌ ಸೆನ್ಸಿಂಗ್‌, ಇನ್‌ಫ್ರಾರೆಡ್‌, ಎಕ್ಸ್‌ರೇ ಫ್ರೀಕ್ವೆನ್ಸಸ್‌ ಇತ್ಯಾದಿ ಅತ್ಯಾ​ಧು​ನಿಕ ಪರೀಕ್ಷಾರ್ಥ ಸೌಲಭ್ಯಗಳನ್ನು ಈ ಉಪ​ಗ್ರಹ ಹೊಂದಿದೆ. ಚಂದ್ರನ ಮೇಲೆ ನೀರಿ​​​ರ​ಬಹುದಾದ ಸಾಧ್ಯತೆಯನ್ನು ಪತ್ತೆ ಹಚ್ಚಿದ ಮೊದಲ ಚಂದ್ರಯಾನ ಮಿಷನ್‌ ಇದು. ಮಂಗಳ​ಯಾನ ಹೆಸರಿನ ಮಾರ್ಸ್‌ ಆರ್ಬಿಟರ್‌ ಮಿಷನ್‌ (ಮಾಮ್‌) ಬಾಹ್ಯಾಕಾಶ ನೌಕೆ ಮಂಗಳ ಗ್ರಹ ಅಧ್ಯಯನ ಉದ್ದೇಶದಿಂದ 2013ರ ನ.5ರಂದು ಇಸ್ರೋದಿಂದ ಉಡಾವ​ಣೆ​ಯಾಗಿದೆ. 2014ರ ಸೆ.24ರಂದು ಗಮ್ಯ ತಲಪುವ ಮೂಲಕ ಪ್ರಥಮ ಪ್ರಯತ್ನ​ದಲ್ಲೇ ಯಶಸ್ವಿ​ಯಾದ ಮಂಗಳ ಗ್ರಹ ಪ್ರಾಜೆಕ್ಟ್ ಎಂಬ ಹೆಗ್ಗಳಿಕೆ ಗಳಿ​ಸಿತು. ಈ ಯೋಜನೆ​ಯು ದಾಖಲೆಯ 74 ಮಿಲಿ​ಯನ್‌ ಡಾಲ​ರ್‌​ನಷ್ಟುಅಲ್ಪ ವೆಚ್ಚದಲ್ಲಿ ನಿರ್ಮಾಣವಾಗಿತ್ತು.
2012-17ರ ಅವಧಿಯಲ್ಲಿ ಇಸ್ರೋ 58 ಬಾಹ್ಯಾಕಾಶ ಯೋಜನೆಗಳನ್ನು ಪೂರೈಸುವ ಉದ್ದೇಶ ಹೊಂದಿದೆ. ಮುಂದಿನ ಎರಡು ವರ್ಷ​ಗ​ಳಲ್ಲಿ 33 ಉಪಗ್ರಹ ಹಾಗೂ ಆ ಬಳಿಕ 25 ಲಾಂಚ್‌ ವೆಹಿಕಲ್‌ ಮಿಷನ್‌ಗಳನ್ನು ಪೂರೈ​ಸು​ವ ಗುರಿ ಇರಿಸಿಕೊಂಡಿದೆ. ಇವುಗಳ ಅಂದಾಜು ವೆಚ್ಚ ಮೂರು ಬಿಲಿಯನ್‌ ಯುಎಸ್‌ ಡಾಲರ್‌ಗಳು.


ಈ ಮಧ್ಯೆ ಇಸ್ರೋ ಸದ್ದಿಲ್ಲದೆ ಮತ್ತೆರಡು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸೌರ​ಮಂಡಲ​​ದಲ್ಲಿ 2ನೇ ಗ್ರಹವಾಗಿರುವ ಶುಕ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಆ ಗ್ರಹದ ಕುರಿತು ಅತ್ಯಮೂಲ್ಯ ಮಾಹಿತಿಯನ್ನು ಹೆಕ್ಕುವ ಉದ್ದೇಶ​ದಿಂದ ಶುಕ್ರ ಗ್ರಹಕ್ಕೆ ಉಪಗ್ರಹ ಯಾತ್ರೆ ಕೈಗೊಳ್ಳಲು ಇಸ್ರೋ ಮುಂದಾಗಿದೆ. 2013ರಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಕೈಗೊಂಡು ವಿಶ್ವವಿಖ್ಯಾತವಾಗಿದ್ದ ಇಸ್ರೋ, ಮತ್ತೊಮ್ಮೆ ಮಂಗಳಯಾನ ಕೈಗೊಳ್ಳಲು ಸಿದ್ಧತೆ​ಯಲ್ಲಿ ತೊಡ​ಗಿದೆ. ಈ ಎರಡೂ ಯೋಜನೆಗಳ ಕುರಿತು ಫೆ.1ರಂದು ಮಂಡನೆಯಾದ ಕೇಂದ್ರ ಬಜೆಟ್‌​ನಲ್ಲಿ ಮಾಹಿತಿ ಇದೆ. ಈ ಬಾರಿಯ ಬಜೆಟ್‌​ನಲ್ಲಿ ಬಾಹ್ಯಾಕಾಶ ಇಲಾಖೆಗೆ ಶೇ.23 ಹೆಚ್ಚು ಅನುದಾನವನ್ನು ವಿತ್ತ ಸಚಿವ ಜೇಟ್ಲಿ ಘೋಷಿ​ಸಿ​ದ್ದಾರೆ. ಬಾಹ್ಯಾಕಾಶ ವಿಜ್ಞಾನ ಎಂಬ ವಿಭಾಗ​ದಲ್ಲಿ ಮಂಗಳಯಾನ- 2 ಹಾಗೂ ಶುಕ್ರ ಗ್ರಹ ಯಾನದ ಕುರಿತು ಪ್ರಸ್ತಾಪಗಳಿವೆ. ಈ ಬಾರಿ ಮಂಗಳ ಗ್ರಹದಲ್ಲಿ ರೊಬೋಟ್‌ನ್ನು ಇಳಿಸುವ ಉದ್ದೇಶವನ್ನು ಇಸ್ರೋ ಹೊಂದಿದೆ. ಇದಕ್ಕಾಗಿ ಈ ಬಾರಿ ಫ್ರಾನ್ಸ್‌ನ ಕಂಪನಿ ಜತೆ ಇಸ್ರೋ ಒಡಂಬಡಿಕೆ ಮಾಡಿಕೊಂಡಿದೆ. ಮಂಗಳಯಾನ ನೌಕೆ​ಯನ್ನು ಆ ಕಂಪನಿ ಜತೆಗೂಡಿ ಇಳಿಸಲಿದೆ. ಮತ್ತೊಂದೆಡೆ ಗ್ರಹಕ್ಕೆ ಮೊದಲ ಬಾರಿ ಯಾನ ಕೈಗೊಳ್ಳಲು ಇಸ್ರೋ ಮುಂದಾಗಲಿದೆ.


ಬಾಹ್ಯಾ​ಕಾಶ ತಂತ್ರ​ಜ್ಞಾನ ಇಂದು ದುಡ್ಡು ಹಾಕಿ ನಾಳೆ ಫಸಲು ತೆಗೆ​ಯುವ ವ್ಯವ​ಹಾ​ರ​ವಲ್ಲ. ಹಾಕಿದ ದುಡ್ಡು ಪೈಸೆ ಪೈಸೆಗೆ ಸಮೇತ ವಸೂ​ಲಿ​ಯಾ​ಗ​ಬೇ​ಕೆಂಬ ಹಠ ತಕ್ಷ​ಣಕ್ಕೆ ಈಡೇ​ರದು. ದೇಶ​ಕ್ಕೊಂದು ಭವ್ಯ ವರ್ಚಸ್ಸು ಕಲ್ಪಿ​ಸುವ, ರಕ್ಷಣೆ, ಸಂವ​​ಹನ, ಹವಾ​ಮಾನ ರಂಗ​ದಲ್ಲಿ ಸ್ವಾವಲ​ಂಬನೆ ಸಾಧಿ​​ಸುವ, ರಾಕೆಟ್‌ ಉಡ್ಡ​ಯನ ರಂಗ​ದಲ್ಲಿ ಮಿತ​ವ್ಯ​​ಯದ ಸಾಧ್ಯತೆ ತೋರಿ​ಸಿ​ಕೊಟ್ಟು ಜಾಗ​ತಿಕ ಮಾರು​​​ಕಟ್ಟೆಕಲ್ಪಿ​ಸಿ​ಕೊಟ್ಟು ದೀರ್ಘಾ​ವ​ಧಿ​ಯ​ಲ್ಲೊಂದು ಬಾಹ್ಯಾ​ಕಾಶ ಪವರ್‌ ಸೆಂಟರ್‌ ಆಗ​ಬ​ಲ್ಲ ಕ್ಷೇತ್ರ​ವಿದು. ದೂರ​ದೃ​ಷ್ಟಿ​ಯಿಂದ ಕೆಲಸ ಮಾಡಿ​ದರೆ ಯಾವ ವರ್ಚಸ್ಸು ಬರು​ತ್ತದೆ ಎಂಬು​ದಕ್ಕೆ ಫೆ.15ರ ಉಡ್ಡ​ಯನ ಸೆಂಚು​ರಿಯೇ ಸಾಕ್ಷಿ.


(KANNADAPRABHA PAGE 6 -17/02.2017)

No comments: